'ಗೆಲುವ ಕನ್ನಡ ನಾಡು'
ಡಾ. ಪ್ರಭಾಕರ್
ಬೆಳವಾಡಿ
(ಹುಯಿಲಗೋಳು
ನಾರಾಯಣರಾಯರ ಸನ್ನಿಧಿಯಲ್ಲಿ)
ಉದಯವಾಗಿದೆ ನೋಡು
ಚೆಲುವ ಕನ್ನಡ ನಾಡು
ಹುಯಿಲುಗೋಳರ ಮೆಚ್ಚಿನ
ಕನಸಿನಾನಂದದ ಗೂಡು
ವಿಖ್ಯಾತವಾಗಿದೆ ನಮ್ಮ
ಗೆಲುವ ಕನ್ನಡ ನಾಡು
ಬದುಕು ಒಲವಿನ ನಿಧಿಯು
ಸಹಬಾಳ್ವೆಯ ಗೂಡು II ಪ II
ರಾಜರಾವೇಶದಿಂ ಆಳಿ ಬೆಳಸಿದ
ನಾಡು
ರಾರಾಜಿಸುವ
ಕನ್ನಂಬಾಡಿ ಕಟ್ಟೆಯ ನೋಡು
ಪಂಪ ರನ್ನ ಜನ್ನರ
ಜಾಡು ಹಿಡಿದಿಹರ ಬೀಡು
ಜ್ಞಾನಪೀಠದ ದಿಗ್ಗಜರ
ಸಾಹಿತ್ಯ ವೈಖರಿಯ ಗೂಡು II ೧ II
ವಿಶ್ವೇಶರಯ್ಯ
ಯಾಜ್ಞವಲ್ಕ ಮಿತಾಕ್ಷರರು ಉತ್ತಿಹ ಬೀಡು
ಸಾಲುಮರದ
ತಿಮ್ಮಕ್ಕನ ಕಾರುಣ್ಯದಿಂದುಳಿದಿಹ ಕಾಡು
ಕೃಷ್ಣೆ ತುಂಗೆ
ಕಾವೇರಿ ಹರಿದುಣಿಸಿ ಬೆಳಸಿಹ ಫಲ ಬೀಡು
ವಿದ್ವತ್ಮಣಿಗಳ
ಗಣಕಾಧಿಪತಿಗಳ ವಿಜ್ಞಾನಿಗಳ ಕಲೆವೀಡು II ೨ II
ಆಚಾರ್ಯರು ದಾಸರು
ವಚನಕಾರರು ಜನಪದರುಗಳ ಘನ ಬೀಡು
ಶಾಂತತೆಯ ಕೂಟ
ಕಾಂತಿಯುತ ನೋಟ ಮೈಗೂಡಿಹ ತಾಯ್ನಾಡು
ಕನ್ನಡದ ನಿಲುಮೆ ಜನರ
ಒಲುಮೆ ಕಿರುಭಾರತವನಾಗಿಸಿದೆ ಈ ಸೂಡು
ಪ್ರಖ್ಯಾತವಾಗಲಿ
ಓಜೆಯಿಂ ತೇಜದಿಂ ಶ್ರೀಗಂಧದ ಹೃದಯದ ನಾಡು II ೩ II
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ