ಗುರುರಾಯರ ಆಗಮನ
ರಚನೆ: ಡಾ. ಪ್ರಭಾಕರ್ ಬೆಳವಾಡಿ
ಗುರುರಾಯರ ಹುಟ್ಟು
ಗೊತ್ತೇನೆ ಗುಟ್ಟು
ಅದು ಭಕ್ತರಿಗಾಗಿ ಬಂದ
ಪುದುವಟ್ಟು II
ಇಂದಿನಾ ದಿನವೂ ಪವಿತ್ರ
ಹುಟ್ಟಿದ್ದು ಇಂದೇ ಚಾರಿತ್ರ
ದೇವರೇ ಕಳಿಸ್ಯಾನಾ ನಮ್ಹತ್ರ
ಬರಲೆಂದು ನಮಗೆ ಸಚ್ಚಾರಿತ್ರ II
ಅನುರಕ್ತನಿಗೆ ಅಭಿವ್ಯಕ್ತ
ಅಶಕ್ತನ ಮಾಡುವ ಶಕ್ತ
ಅಕ್ಷತೆ ಪಡೆಯಲು ಭಕ್ತ
ದೋಷದಿಂದಲಿ ಮುಕ್ತ II
ಅಭ್ಯಂಜನ ಮಾಡಿ
ರಾಯರಿದ್ದಲ್ಲಿ ನಡಿ
ಮಡಿ ಸೀರೆಯನುಟ್ಟು
ಇಟ್ಟು ಹಣೆಯಾಗ ಬೊಟ್ಟು II
ಮನದಲ್ಲೇ ಹುಟ್ಯಾನ
ಮನದಾಗೆ ನಿಂತಾನ
ಮನವೇ ಅವನ ಸ್ಥಾನ
ಇಂದಿನ ದಿನವೇ ಸುದಿನ II
ನಮಗಾಗೆ ಬಂದಾನ
ಹರಸಾಲು ಬಂದಾನ
ಮಾಡಿರೆ ಅವನದೇ ಧ್ಯಾನ
ಹಾಡುತ ನೀವಿಂದು ಗುಣಗಾನ II