ಚುಟುಕು ರಾಮಾಯಣ
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ
ರಾಮನು ಹುಟ್ಟಿದ ಅಯೋಧ್ಯೆ ಧಾಮ
ದಾಸರು ಹಾಡಲು ರಾಮ ನಾಮ
ರಘುಪತಿ ರಾಘವ ರಾಜಾ ರಾಮ
ಮಾಡುವ ಭಜನೆ ಜೈ ಸೀಯಾರಾಮ
ಉಳುತಲು ಇರಲು ಸಿಕ್ಕಳು ಸೀತೆ
ಜನಕ ರಾಜನ ಪರಮ ಪುನೀತೆ
ಶಿವ ಧನುಸ್ಸನು ಮುರಿಯುವ ಗಾತೆ
ಮುರಿದು ರಾಮನು ವರಿಸಿದ ಸೀತೆ
ದಶರಥ ರಾಜಗೆ ಅಂಟಿದ ಶಾಪ
ಪಟ್ಟವ ಏರದೇ ರಾಮನು ಪಾಪ
ಉಳಿಸಿದ ತಂದೆಯು ಕೊಟ್ಟ ಮಾತು
ಕೈಕೇಯಿಗೆ ಕೊಟ್ಟ ಅಂದಿನ ಮಾತು
ಹೊರಟನು ರಾಮ ನಾರನು ತೊಟ್ಟು
ಭರತಗೆ ತನ್ನ ಪಾದುಕೆ ಕೊಟ್ಟು
ಸೀತೆ ಲಕ್ಷ್ಮಣ ಜೊತೆಯಲಿ ಬರಲು
ದಶರಥ ಸತ್ತನು ತಾಳದೆ ಅಳಲು
‘ರಾಮಾ ರಾಮಾ’ ಕೇಳುತ ಧ್ವನಿಯ
ಸೀತೆಯು ಹೆದರಿ ದಾಟಲು ಗೆರೆಯ
ಮಾರು ವೇಷದಿ ಸೀತೆಯ ಹಿಡಿದು
ಹಾರಿದ ರಾವಣ ಪುಷ್ಪಕ ಪಿಡಿದು
ಕುರುಹನು ನೀಡಿ ನಮನವ ಮಾಡಿ
ಪ್ರಾಣವ ಬಿಟ್ಟಿತು ಪಕ್ಷಯು
ನೋಡಿ
ಅರಸುತ ಹೊರಟನು ಮುಂದಕೆ ರಾಮ
ವಾಲಿಯ ಕಾರಣ ಸಿಕ್ಕನು ಹನುಮ
ಅಡ್ಡ ಬರಲು ಕಡಲದು ನಡುವೆ
ಹನುಮ ನೆಗೆದನು ರಾಮನ ನೆನೆದು
ಅತ್ತಳು ಸೀತೆ ಪಡೆಯಲು ಒಡವೆ
ಲಂಕೆಯ ಸುಟ್ಟನು ಹನುಮ
ಜಿಗಿದು
ಅಶೋಕ ವನದಲಿ ಇದ್ದಳು ಸೀತೆ
ದಾಟುವ ಬಗೆಯ ತಿಳಿಯದೇ ರಾಮ
ಹನುಮಗೆ ಕೇಳಿದ ಏನಿದೆ ಆಯಾಮ
ಜಿಗಿದನು ಹನುಮ ಅನ್ನುತ
ಜೈಶ್ರೀರಾಮ
ಲಂಕೆಯ ವನದಲಿ ಕೇಳಿದ ರಾಮನಾಮ
ಅಶೋಕ ವನದಲಿ ಇದ್ದಳು ಸೀತೆ
ಪಡೆದಳು ರಾಮನ ಉಂಗುರ ಮಾತೆ
ಲಂಕೆಯ ಸುಟ್ಟ ಹನುಮನ ಗಾತೆ
ವಾನರ ಸೇನೆ ಕಟ್ಟಿತು ಸೇತುವೆ
ಅಳಿಲೂ ಮಾಡಲು ತಮ್ಮಯ ಸೇವೆ
ರಾವಣ ದರ್ಪವ ಮುರಿದನು ರಾಮ
ರಾಮನ ಸಂಗಡ ಇದ್ದನು ಹನುಮ
ರಾಮನು ಮುಗಿಸಿದ ತಾ ವನವಾಸ
ಬರೆದನು ಪ್ರಭಾಕರ ಆ / ರಾಮನ
ಇತಿಹಾಸ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ