'ಇರಬೇಕು ಹುಣ್ಣಿಮೆ ಚಂದಮನಂತೆ'
ಕರ್ತೃ: ಡಾ. ಪ್ರಭಾಕರ್ ಬೆಳವಾಡಿ
ಇದ್ದರೆ ಇರಬೇಕು ಹದಿನೈದು ದಿನಕೊಮ್ಮೆ
ಬರುವ ಹುಣ್ಣಿಮೆ ಚಂದಮನಂತೆ
ನೋಡತಿರಬೇಕು ಹದಿನೈದು ದಿನಕೊಮ್ಮೆ
ಮುಖಪುಟದ ಗುಂಪುಗಳ ಸಂತೆ
ಇದ್ದರೆ ಇರಬೇಕು ಹದಿನೈದು ದಿನಕೊಮ್ಮೆ
ಏಕಾದಶಿಯ ಫಲಹಾರದಂತೆ
ತೋರುತಿರಬೇಕು ಹದಿನೈದು ದಿನಕೊಮ್ಮೆ
ನಿಮ್ಮ ಸುಖ ದುಃಖಗಳ ಅನುಭವವಂತೆ
ನಡುವೆ ಬಿಟ್ಟು ಬಿಡಬೇಕು ಮೊಬೈಲ್ ಚಿಂತೆ
ಋಷಿಮುನಿಗಳ ಘನಘೋರ ತಪಸ್ಸಿನಂತೆ
ಚಿಂತೆಗಳ ಮರೆಯಲು ದಿವ್ಯ ಪರಮೌಷಧಿಯಂತೆ
ಗೆಳೆಯ ಗಳತಿಯರ ಯೋಗಕ್ಷೇಮ ವಿಚಾರಿಸಿದಂತೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ